ಪ್ರಾದೇಶಿಕ

Mangalore : "ನಾಟಕದ ಓದು" ಓದಿನಲ್ಲಿಯೂ ಇದೊಂದು ಭಿನ್ನ ಪ್ರಯೋಗ

"ನಾಟಕದ ಓದು" ಓದಿನಲ್ಲಿಯೂ ಇದೊಂದು ಭಿನ್ನ ಪ್ರಯೋಗ


ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ ಸಂಸ್ಥೆಯು ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಜುಲೈ 12, 2026 ಭಾನುವಾರದದಂದು ಎಲ್.ಸಿ.ಆರ್.ಐ. ಸಭಾಂಗಣದಲ್ಲಿ "ನಾಟಕದ ಓದು"  ಕಾರ್ಯಕ್ರಮವನ್ನು ಆಯೋಜಿಸಿತ್ತು. 

 "ಅಶ್ವಪರ್ವ" ನಾಟಕವನ್ನು ಈ ಸಂದರ್ಭದಲ್ಲಿ ಓದಲಾಯಿತು. ಈ ಇದು ಪರಿಣಾಮಕಾರಿಯಾಗಿ ನಾಟಕವನ್ನು ಹೇಗೆ ಓದಬಹುದು ಎಂಬ ಹಿನ್ನೆಲೆಯಲ್ಲಿ ಮಾಡಿದ ಪ್ರಯೋಗವಾಗಿತ್ತು. ಪಾತ್ರ ಮತ್ತು ಸನ್ನಿವೇಶಗಳಿಗೆ ಅನುಗುಣವಾಗಿ ಹಿನ್ನೆಲೆಯಲ್ಲಿ ಪೂರಕ ಸಂಗೀತ ಮತ್ತು ಹಾಡುಗಳನ್ನು ಬಳಸಲಾಗಿತ್ತು. 


ನಾಟಕ: ಅಶ್ವಪರ್ವ, ರಚನೆ: ಎಸ್. ರಾಮನಾಥ್

ಓದಿದವರು:

ಅಶ್ವತ್ಥಾಮ:  ಡಾ. ಆರ್. ನರಸಿಂಹ ಮೂರ್ತಿ

ನಾರಣಪ್ಪ : ರೋಹನ್ ಉಚ್ಚಿಲ್

ಕುಂಭ : ಕಿರಣ್ ಕುಮಾರ್ 

ಕಾಲ, ನಿರೂಪಣೆ : ಸುನಿಲ್ ಪಲ್ಲಮಜಲು

ಪಾರಿವಾಳ : ಶರಣ್ಯ ಎನ್. ಟಿ.

ದೀಪ : ಶಶಾಂಕ್ ಐತಾಳ್

ಹಿನ್ನೆಲೆ ಗಾಯನ ಮತ್ತು ಸಂಗೀತ : ಮೇಘನಾ ಕುಂದಾಪುರ ಮತ್ತು ಶಮಿತಾ ಆಚಾರ್ಯ

 ಬೆಳಕು:  ಸುಧೀಶ್ ಕೂಡ್ಲು

ಸಹಕಾರ:  ಶ್ರೀಶ ಕುಮಾರ್ 

ಧ್ವನಿ:  ರಾಜೇಶ್

 ದಾಖಖಲೀಕರಣ: ಕಾವ್ಯ ಹೆಬ್ರಿ 

 ಬಳಿಕ ನಾಟಕ ಮತ್ತು ಪ್ರಯೋಗದ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಭಾಗವಹಿಸಿದ್ದ ಹಿರಿ-ಕಿರಿಯ ಪ್ರೇಕ್ಷಕರು ಈ ಪ್ರಯೋಗಕ್ಕೆ ಸ್ಪಂದಿಸಿ ಅಭಿಪ್ರಾಯ ವ್ಯಕ್ತಪಡಿಸಿದರು. ಓದಿನ ಪ್ರಯೋಗಗಳು ನಡೆದರೂ ಓದಿನಲ್ಲಿಯೂ ಇದೊಂದು ಭಿನ್ನ ಪ್ರಯೋಗ ಎಂಬ ಅಭಿಪ್ರಾಯ ವ್ಯಕ್ತವಾಯಿತು.